Monthly Archives: December 2023

ಶ್ರೀಕೃಷ್ಣನ ಲೀಲೆಗಳ ಸಾರಾಂಶ ಭಾಗ – 3 – ಪೂತನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

<< ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಕೃಷ್ಣನು ಗೋಕುಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದನು. ತಾಯಿ ಯಶೋದೆ, ನಂದಗೋಪರು ಮತ್ತು ಗೋಪಾಲಕರು ಅವನಿಗೆ ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು.

ಕಂಸನು ತನ್ನ ಸಂಹಾರವು ಶ್ರೀಕೃಷ್ಣನಿಂದ ಸಂಭವಿಸುತ್ತದೆ ಎಂದು ತಿಳಿದು, ಅವನು ಪೂತನಿಯೆಂಬ ರಾಕ್ಷಸಿಗೆ ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಎಲ್ಲಾ ಕಡೆ ಇದ್ದ ಮಕ್ಕಳನ್ನು ಕೊಲ್ಲುವಂತೆ ಆದೇಶಿಸಿದನು. ಆಗ ಪೂತನಿಯು ತನ್ನ ರಾಕ್ಷಸಿರೂಪ ಮರೆಮಾಡಿ, ಆಕೆ ಸುಂದರ ದೇವತಾಸ್ತ್ರೀ ರೂಪವನ್ನು ಧರಿಸಿ ಗೋಕುಲಕ್ಕೆ ಹೋದಳು. ಯಶೋದೆಯು ಶ್ರೀಕೃಷ್ಣನನ್ನು ಮಲಗಿಸಿ, ತನ್ನ ಕಾರ್ಯಗಳಲ್ಲಿ ನಿರಿತಳಾದಳು. ಆ ಸಮಯದಲ್ಲಿ ಪೂತನಿಯು ಶ್ರೀಕೃಷ್ಣನಿದ್ದ ಸ್ಥಳಕ್ಕೆ ಬಂದಳು. ಈ ಹಿಂದೆ ಅವಳು ಶ್ರೀಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ತನ್ನ ಸ್ತನಗಳಲ್ಲಿ ವಿಷ-ಮಿಶ್ರತ-ಹಾಲನ್ನು ಇರಿಸಿಕೊಂಡಿದ್ದಳು.

ಶ್ರೀಕೃಷ್ಣನಿಗೆ ಆವಳ ಆಗಮನದ ಉದ್ದೇಶ ಅರ್ಥವಾಯಿತು. ಆಕೆಯನ್ನು ಸೂಕ್ತ ರೀತಿಯಲ್ಲಿ ಸಂಹಾರ ಮಾಡುವುದಾಗಿ ನಿರ್ಧರಿಸಿದನು. ಆಕೆಯು ಸುಂದರ ದೇವತೆಯಂತೆ ಕಾಣುತ್ತಿದ್ದರಿಂದ, ಅಲ್ಲಿ ಯಾರೂ ಅವಳನ್ನು ಅನುಮಾನಿಸಲಿಲ್ಲ.ಅವಳು ಶ್ರೀಕೃಷ್ಣನನ್ನು ಮೇಲಕ್ಕೆತ್ತಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅವನಿಗೆ ಸ್ತನ್ಯಪಾನ ಮಾಡಿಸಿದಳು. ಅವನು ಸಹ ತನ್ನ ತಾಯಿಯ ಹಾಲನ್ನು ಸೇವಿಸುವಂತೆ, ಅವಳ ಹಾಲನ್ನು ಆತುರದಿಂದ ಸೇವಿಸಿದನು.ಆದರೆ ಶೀಘ್ರದಲ್ಲೇ, ಅವನು ಅದರ ಮೂಲಕ ಪೂತನಿಯ ಪ್ರಾಣವನ್ನು ಹೀರಲು ಪ್ರಾರಂಭಿಸಿದನು ಮತ್ತು ಅವಳನ್ನು ಸಂಹರಿಸಿದನು. ಅವಳು “ಹಾ” ಎಂದು ಕೂಗಿದಳು ಮತ್ತು ತನ್ನ ಬೃಹತ್ ರಾಕ್ಷಸರೂಪದಿಂದ ಕೆಳಗೆ ಬಿದ್ದು ಸತ್ತಳು. ಅದನ್ನು ನೋಡಿದ ಯಶೋದೆ ಓಡಿ ಬಂದು ಆತನನ್ನು ಮೇಲೆತ್ತಿ ಸಮಾಧಾನಪಡಿಸಿದಳು.

ಈ ಘಟನೆಯನ್ನು ಅನೇಕ ಕಡೆಗಳಲ್ಲಿ ಅನೇಕ ಆಳ್ವಾರರು ಬಹಳವಾಗಿ ಆನಂದಿಸಿದ್ದಾರೆ. ಆಳ್ವಾರರು ಪೂತನಿಯನ್ನು ಉದ್ದೇಶಿಸಿ ಹೇಳುವಾಗ ಅವರು “ಪೇಯ್”, ”ಪೇಯ್ಯಾಚ್ಚಿ”, ಮತ್ತು “ಪೂತನಿಯೈ” ಎಂಬ ಪದಗಳನ್ನು ಬಳಸಿದ್ದಾರೆ ಮತ್ತು ಆಕೆಯ ಕ್ರೂರ ಕೃತ್ಯದಿಂದಾಗಿ ಭಯಭೀತರಾಗಿದ್ದಾರೆ.
ಈ ಘಟನೆಯಲ್ಲಿರುವ ಅದ್ಭುತ ಸಾರವನ್ನು ನೋಡೋಣ:

  • ಶ್ರೀ ರಾಮಾವತಾರದಲ್ಲಿ, ಎಂಪೆರುಮಾನ್ ಮೊದಲು ತಾಟಕಿ ಎಂಬ ಹೆಣ್ಣು ರಾಕ್ಷಸನನ್ನು ಕೊಂದನು. ಇಲ್ಲಿ, ಕೃಷ್ಣಾವತಾರದಲ್ಲಿ, ಅವನು ಮೊದಲು ಪೂತನನನ್ನು ಕೊಂದನು.
  • ಅವಳು ಅವನ ಮೇಲೆ ಪ್ರೀತಿ ತೋರಿದಂತೆ ಅವನೂ ಅವಳ ಮೇಲೆ ಪ್ರೀತಿ ತೋರಿ ಅವಳ ಹಾಲು ಕುಡಿದನು.
    ಅವಳು(ಪೂತನಿಯು) ವಿಷವನ್ನು ಹೊಂದಿದ್ದರೂ, ಅವಳು ಅದನ್ನು ಕೃಷ್ಣನಿಗಾಗಿ ಮಾತ್ರ ಹೊಂದಿದ್ದಳು. ಆದುದರಿಂದ ಭಗವಂತನು ಅದನ್ನು ಉತ್ಸಾಹದಿಂದ ಸ್ವೀಕರಿಸಿದರು. ತನಗಾಗಿ ಪ್ರತ್ಯೇಕವಾಗಿ ಇರಿಸಲಾಗಿರುವ ಯಾವುದನ್ನಾದರೂ ಅವನು ಸ್ವೀಕರಿಸುತ್ತಾನೆ.
  • ಅವಳನ್ನು ಕೊಲ್ಲುವುದು ಅವನ ಉದ್ದೇಶವಲ್ಲ. ಆದರೆ ಅವಳು ದುಷ್ಟ ಉದ್ದೇಶದಿಂದ ಬಂದಿದ್ದರಿಂದ ಸಹಜವಾಗಿಯೇ ಅವನಿಂದ ಕೊಲ್ಲಲ್ಪಟ್ಟಳು.
  • ಎಂಪೆರುಮಾನ್‌ನಲ್ಲಿ/ಭಗವಂತನಲ್ಲಿ ಪ್ರೀತಿಯನ್ನು ಹೊಂದಿರುವಂತೆ ನಾವು ಎಷ್ಟೇ ಪರಿಪೂರ್ಣವಾಗಿ ನಟಿಸಿದರೂ, ಎಂಪೆರುಮಾನ್ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆ ಆಲೋಚನೆಗಳನ್ನು ಛಿದ್ರಗೊಳಿಸುತ್ತಾನೆ.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://srivaishnavagranthamstamil.wordpress.com/2023/08/24/krishna-leela-3/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಶ್ರೀಕೃಷ್ಣ ಲೀಲೆಗಳ ಸಾರಾಂಶ – 2 – ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

<< ಶ್ರೀಕೃಷ್ಣನ ಜನನ

ಪೆರಿಯಾಳ್ವಾರ್, ತಾಯಿ ಯಶೋದೆಯ ಮಾತೃಭಾವದಲ್ಲಿ, ಶ್ರೀಕೃಷ್ಣನ ಲೀಲೆಗಳನ್ನು ಆನಂದಿಸಿದರು ಮತ್ತು ಸುಂದರವಾದ ಪಾಶುರಗಳ ರೂಪದಲ್ಲಿ ನಮಗೆ ಪ್ರಸ್ತುತಪಡಿಸಿದರು. ಅವರ ಪೆರಿಯಾಳ್ವಾರ್ ತಿರುಮೊಳಿಯಲ್ಲಿ ಹಲವು ಪದಿಗಗಳಲ್ಲಿ ಅವರು ಶ್ರೀಕೃಷ್ಣನ ಅನೇಕ ಲೀಲೆಗಳನ್ನು ಆನಂದಿಸಿದರು ಮತ್ತು ಅವುಗಳನ್ನು  ವಿಸ್ತಾರವಾಗಿ ವಿವರಿಸಿದರು.

ಪೆರಿಯಾಳ್ವಾರ್ ತಿರುಮೊಳಿಯಲ್ಲಿ “ವಣ್ಣ ಮಾಡಙ್ಗಳ್ ಶೂಳ್ ತಿರುಕ್ಕೋಟ್ಟಿಯೂರ್ ಕಣ್ಣನ್ ಕೇಶವನ್ ನಮ್ಬಿಪಿರನ್ದನಿಲ್, ಎಣ್ಣೆಯ್ ಶುಣ್ಣಮ್ ಎದಿರೆದಿಲ್ ತೂವಿಡ ಕಣ್ಣನ್ ಮುತ್ತಮ್ ಕಲನ್ದಳರಾಯಿತ್ತೇ” ಎಂದು ಪ್ರಾರಂಭಿಸಿದ್ದಾರೆ (ವರ್ಣರಂಜಿತವಾದ ಕಟ್ಟಡಗಳಿಂದ ಸುತ್ತುವರಿದರುವ ತಿರುಕ್ಕೋಟ್ಟಿಯೂರಿನಲ್ಲಿ, ಕೇಶವನೆಂದು ಕರೆಯಲ್ಪಡುವ ಪೂರ್ಣನಾದ ಭಗವಂತನು ಶ್ರೀಕೃಷ್ಣನಾಗಿ ಅವತರಿಸಿದನು; ಎಣ್ಣೆ ಮತ್ತು ಬಣ್ಣನ ನೀರನ್ನು ಪರಸ್ಪರ ಎಸೆಯಲಾಯಿತು ಮತ್ತು ಕೃಷ್ಣನ ಸ್ಥಳದ ಮುಂಭಾಗದ ಅಂಗಳವು ಕೆಸರಾಯಿತು), ಭಗವಂತನ ಜನ್ಮವನ್ನು ಅಲ್ಲಿನ ಜನರು ಹೀಗೆ ಆಚರಿಸಿದರು ಎಂಬುದನ್ನು ಅವರು ನಮಗೆ ದೃಶ್ಯೀಕರಿಸಲು ಸುಂದರವಾದ ನಿರೂಪಣೆಯಲ್ಲಿ ತೋರಿಸುತ್ತಾರೆ.

  • ತದನಂತರ, ಗೋಪಾ ಗೋಪಿಯರು ತಮ್ಮ  ಮುಖ್ಯಸ್ಥರಾದ ನಂದಗೋಪರು ಮತ್ತು ಅವರ ಪತ್ನಿಯಾದ ಯಶೋದ ಪಿರಾಟ್ಟಿಯ ಮಗವಿನ ಜನನನಿಂದ ಆನಂದತುಂದಿಲರಾಗಿ ಬಣ್ಣನ ಎರಚ್ಚುತ್ತಾ ಸಂಭ್ರಮದಿಂದ ನೃತ್ಯ ಗೀತೆಗಳಿಂದ ಆಚರಿಸಿದರು .
  • ಗೋಪಾಲಕರೆಲ್ಲರೂ ಒಬ್ಬೊಬ್ಬರಾಗಿ ಬಂದು ಶ್ರೀಕೃಷ್ಣನನ್ನು ಕೈಗೆತ್ತಿಕೊಂಡು ಮುದ್ದಾಡಿದರು. ಅವರು ಗಳಿಸಿದ ಆನಂದಕ್ಕೆ ಮಿತಿಯೇ ಇರಲಿಲ್ಲ .
  • ಬ್ರಹ್ಮ, ರುದ್ರ ಇಂದ್ರ ಮತ್ತು ಇತರೆ ದೇವಾನುದೇವತೆಗಳು ಬಂದು ಶ್ರೀಕೃಷ್ಣನಿಗೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.
  • ಪೆರಿಯಾಳ್ವಾರರು ಶ್ರೀಕೃಷ್ಣನು ಚಂದ್ರನನ್ನು ನೋಡುವುದು, ತಾಯಿ ಯಶೋದೆಯ ಬೆನ್ನಿನ ಮೇಲೆ ತೂಗನೀಡಿದನ್ನು, ಕೈ ಚಪ್ಪಾಳೆ ತಟ್ಟುವುದು, ಅಂಬೆಗಾಲುಗಳಿಂದ ನಡೆಯುವುದನ್ನು, ಯಶೋದೆ ದೇವಿಯ ಸ್ತನ್ಯಪಾನ ಮಾಡುವುದನ್ನು , ಶ್ರೀಕೃಷ್ಣನ ಕರ್ಣಾವೇಧ ಸಂಸ್ಕಾರ, ಶ್ರೀಕೃಷ್ಣನ ತಿರುಮಂಜನ, ಕೇಶಾಲಂಕಾರ, ಪುಷ್ಪಾಲಂಕಾರ, ಶ್ರೀಕೃಷ್ಣನಿಗೆ ದೃಷ್ಟಿ ತೆಗೆಯುವುದು,  ನವನೀತವನ್ನು ಅಪಹರಿಸಿ ಇದರಿಂದ ಸಿಕ್ಕಿಬೇಳುವುದು,  ದಾನವ ಸಂಹಾರ, ವೇಣುನಾದ ಮಾಡುವುದು, ದನ-ಕರುಗಳನ್ನು  ಮೇಯಿಸುವುದನ್ನು, ಗೋಪಿಕಾ ಸ್ತ್ರೀಯರ ಜೊತೆಗೂಡಿ ರಾಸಕ್ರೀಡೆ ಮುಂತಾದ ಅನೇಕ ಲೀಲೆಗಳನ್ನು ತೋರಿಸಿದ್ದಾರೆ. ಇತರ ಆಳ್ವಾರರು ಸಹ ಶ್ರೀಕೃಷ್ಣನ ಜನನ ಮತ್ತು  ಲೀಲೆಗಳನ್ನು  ಆನಂದಿಸಿದ್ದಾರೆ.

“ಉಣ್ಣುಂ ಶೋರು, ಪರುಹುನೀರ್ ತಿನ್ನುಂ ವೆತ್ತಿಲೈಯುಂ ಎಲ್ಲಾಂ ಕಣ್ಣನ್” ಕೃಷ್ಣನಿಗೆ ಬೆಣ್ಣೆ, ತುಪ್ಪ, ಹಾಲು ಮತ್ತು ಮೊಸರು ತುಂಬಾ ಇಷ್ಟವಿತ್ತು. ನಮ್ಮಾಳ್ವಾರರು, ಶ್ರೀಕೃಷ್ಣ ಬೆಣ್ಣೆಯನ್ನು ಕದ್ದು ಸಿಕ್ಕಿಬಿದ್ದ ಘಟನೆಯನ್ನು ಧ್ಯಾನಿಸಿದರು ಮತ್ತು ಆರು ತಿಂಗಳ ಕಾಲ ಪ್ರಜ್ಞಾಹೀನರಾಗಿದ್ದರು. ನಮ್ಮಾಳ್ವಾರ್, ತಿರುಮಂಗೈ ಆಳ್ವಾರ್ ಮತ್ತು ಕುಲಶೇಖರಾಳ್ವಾರ್ ತಮ್ಮ ಪಾಸುರಗಳಲ್ಲಿ ಕೃಷ್ಣನೊಂದಿಗೆ ಪ್ರಣಯ ಕೋಪವನ್ನು ವಿವರವಾಗಿ ಅನುಭವಿಸಿದ್ದಾರೆ. ಶ್ರೀಮಾನ್ ನಾಥಮುನಿಗಳಿಂದ ಪ್ರಾರಂಭವಾಗುವ ಆಚಾರ್ಯರು ಕೃಷ್ಣಾವತಾರದಲ್ಲಿ ಆಳವಾಗಿ ತಲ್ಲೀನರಾಗಿದ್ದರು.

ಕೃಷ್ಣಾವತಾರವನ್ನು ಆಸ್ವಾದಿಸುವಾಗಲೂ, ಆಳ್ವಾರರು ಮತ್ತು ಆಚಾರ್ಯರು, ಅರ್ಚಾವತಾರಕ್ಕೆ ಸಂಬಂಧಿಸಿದಂತೆ ಅವನನ್ನು ಆನಂದಿಸಿದರು. ವಿಭವ ಅವತಾರವನ್ನು ಆನಂದಿಸಲು ಸಾಧ್ಯವಾಗದವರಿಗೆ ಆರ್ಚಾವತಾರವನ್ನು ಪ್ರತಿನಿಧಿಯಾಗಿ ವೈಭವೀಕರಿಸಲಾಗಿದೆ.

ತರುವಾಯ, ನಾವು ಎಂಪೆರುಮಾನ್‌ನ/ಭಗವಂತನ ಪ್ರತಿಯೊಂದು ಲೀಲೆಯನ್ನು ಮತ್ತು ಆ ಪ್ರತಿಯೊಂದು ಲೀಲೆಗಳಲ್ಲಿ ಸಾರವನ್ನು ನೋಡುತ್ತೇವೆ.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://srivaishnavagranthamstamil.wordpress.com/2023/08/23/krishna-leela-2/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಶ್ರೀಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ  ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ ಮಥುರೆಯಲ್ಲಿ ಶ್ರೀಕೃಷ್ಣ ನು ಅವತರಿಸಿದವನು) ಮತ್ತು “ಒರುತ್ತಿ ಮಾಗನಾಯ್ ಪ್ಪಿರಂದು”(ಶ್ರೀದೇವಕೀ ದೇವಿಯ ಪುತ್ರನಾಗಿ ಜನಿಸಿದವನು).

ಭಗವಂತನು ಅವತರಿಸುವುದು ಆತನ ಕರುಣೆಯಿಂದ ಮಾತ್ರವೆಂದು ನಾವು ಈಗಾಗಲೇ ನೋಡಿದ್ದೇವೆ. ಹೇಗೆ ಒಬ್ಬ ತಾಯಿಯು ತನ್ನ ಮಗು ಬಾವಿಯಲ್ಲಿ ಬಿದ್ದಾಗ ಸ್ವತಃ ಆ ಮಗುವಿನ ರಕ್ಷಣೆಗಾಗಿ ತಾನು ಸಹ ಬಾವಿಗೆ ಹಾರುತ್ತಾಳೋ, ಅದೇ ರೀತಿ ಭಗವಂತನು ಜೀವಾತ್ಮರನ್ನು ಕಷ್ಟಕಾರ್ಪಣ್ಯಗಳ ಸಂಕೋಲೆಯಿಂದ ಬಿಡಿಸಲು ಈ ಲೀಲಾವಿಭೂತಿಯಲ್ಲಿ ಅವತರಿಸುತ್ತಾನೆ. ಹೀಗೆ ಅವನು ಅವತರಿಸಿ ,ತನ್ನ ದಿವ್ಯಲೀಲೆಗಳಿಂದ ಜನರ ಚಿತ್ತವನ್ನು ತನ್ನ ಹತ್ತಿರ ಸೆಳೆಯುತ್ತಾನೆ.

ಭಗವಂತನ ಅವತಾರಗಳು ಮತ್ತು ದಿವ್ಯಲೀಲಿಗಳ ಹಿರಿಮೆಗಳೆಂದರೆ:

•ಅಂತಹ ಭಗವಂತನು ಈ ಲೀಲಾವಿಭೂತಿಯಲ್ಲಿ ಅವತರಿಸಿದನೆಂದು ನಾವು ಅರಿತುಕೊಂಡರೆ, ನಮಗೆ ಈ ಭೌತಿಕ ಪ್ರಪಂಚದಲ್ಲಿ ಇನ್ನು ಮುಂದೆ ಜನ್ಮವಿಲ್ಲ.

•ಭಗವಂತನು ಇಲ್ಲಿ ಹುಟ್ಟಿ ತಾಯಿಯ ಸ್ತನ್ಯಪಾನ ಮಾಡಿದನು ಎಂದು ಅರಿತರೆ ,ನಾವು ತಾಯಿಯ ಸ್ತನ್ಯಪಾನ ಮಾಡಲು ಇಲ್ಲಿ ಹುಟ್ಟುಬೇಕಾಗಿಲ್ಲ.

•ಭಗವಂತನು ಲೀಲಾವಿನೋದಾರ್ಥವಾಗಿ ನವನೀತವನ್ನು ಕದ್ದು ಅದರಿಂದಾಗಿ ಒರಳಿಗೆ ಕಟ್ಟಿಸಿಕೊಂಡು, ಪೆಟ್ಟು ತಿಂದು ಅಳುತ್ತಾನೆ ಎಂದು ಅರಿತರೆ ನಮಗೆ ಸಂಸಾರದ ಬಂಧನವಿರುವುದಿಲ್ಲ.

ದ್ವಾಪರಯುಗದ ಅಂತ್ಯದಲ್ಲಿ  ಕಂಸ, ಜರಾಸಂಧರಂತಹ ದುಷ್ಟರ ಉಪತಳದಿಂದಾಗಿ, ಬ್ರಹ್ಮಾದಿ ದೇವತೆಗಳು ಸರ್ವೇಶ್ವರನಾದ,ಕ್ಷಿರಾಬ್ಧಿವಾಸನಾದ ಶ್ರೀಮನ್ನಾರಾಯಣನ ಮೊರೆ ಹೋದರು ಮತ್ತು ಹೇಗೆ ಪ್ರಾರ್ಥಿಸಿದರು “ಹೇ ದೇವಾದಿ ದೇವ ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾರ್ಥಕ್ಕಾಗಿ ಈ ಭೂಲೋಕದಲ್ಲಿ ಅವತರಿಸಿ ಧರ್ಮವನ್ನು ಸ್ಥಾಪಿಸಬೇಕು”.

ಎಂಬೆರುಮಾನ್(ಭಗವಂತನು) ಅವರನ್ನು ಸಮಾಧಾನಪಡಿಸಿ ತಾನು ಸೂಕ್ತ ಕಾಲದಲ್ಲಿ ಅವತರಿಸಿ ಭೂಭಾರವನ್ನು ನಾಶ ಮಾಡುವುದಾಗಿ ವಚನ ನೀಡಿ ಕಳುಹಿಸಿದನು.

ದೇವಕಿ ದೇವಿ ಮತ್ತು ಶ್ರೀ ವಸುದೇವ ತಮ್ಮ ಪೂರ್ವಜನ್ಮ ದಲ್ಲಿ ಭಗವಂತನನ್ನು ಪ್ರಾರ್ಥಿಸಿದರು ಮತ್ತು ಭಗವಂತನು ಸ್ವತಃ ತಮ್ಮ ಪುತ್ರನಾಗಿ ಜನಿಸಬೇಕೆಂಬ ವರವನ್ನು ಪಡೆದಿದ್ದರು.ಆದ್ದರಿಂದ ಭಗವಂತನು ಈ ದಂಪತಿಗಳಿಗೆ ಪುತ್ರನಾಗಿ ಅವತರಿಸುವುದಾಗಿ ನಿರ್ಧರಿಸಿದನು. ಕಂಸನು ತನ್ನ ಭಗಿನಿಯಾದ(ಸಹೋದರಿ) ದೇವಕೀಯನ್ನು ವಸುದೇವನೊಂದಿಗೆ ವೈಭವದಿಂದ ವಿವಾಹವನ್ನು ನೆರವೇರಿಸಿದನು. ಕಂಸನು ನವದಂಪತಿಗಳನ್ನು ತನ್ನ ರಥದಲ್ಲಿ ಪಟ್ಟಣಕ್ಕೆ ಕರೆತಂದನು. ಆ ಸಮಯದಲ್ಲಿ  ಆಕಾಶವಾಣಿಯು ಕೇಳಿಸಿತು,  ಅದು ಹೇಳಿತು”ಓ ಕಂಸ!ದೇವಕಿಯ ಅಷ್ಟಮ ಗರ್ಭದಿಂದ ಜನಿಸುವ ಪುತ್ರನಿಂದ ನಿನ್ನ ಮರಣವು ಸಂಭವಿಸುತ್ತದೆ”.ಇದನ್ನು ಕೇಳಿದ ಕಂಸನು ಬಹಳ ವಿಚಲಿತನಾದನು ಮತ್ತು ಕೋಪದಿಂದ ತನ್ನ ಖಡ್ಗದಿಂದ ಇಬ್ಬರನ್ನು ಕೊಲ್ಲಲು ಹೊರಟರು.ಆ ಸಮಯದಲ್ಲಿ ಶ್ರೀವಸುದೇವ ಪ್ರಾರ್ಥಿಸಿದರು “ಓ ಕಂಸ!ನಾವು ನಿನಗೆ ಯಾವುದೇ ಅಹಿತವನ್ನು ಉಂಟುಮಾಡುವುದಿಲ್ಲ ನಮಗೆ ಜನಿಸುವ ಶಿಶುಗಳನ್ನೆಲ್ಲ ನಿನಗೆ ಒಪ್ಪಿಸುತ್ತೇವೆ”. ಈ ಪ್ರಸ್ತಾಪವನ್ನು ಒಪ್ಪಿ ಅವರನ್ನು ಜೀವಂತವಾಗಿ ಉಳಿಸಿದರು.

ತರುವಾಯ ಕಂಸನು ಅವರಿಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸಿದನು. ತದನಂತರ ದೇವಕಿಯು ತನ್ನ ಮಕ್ಕಳನ್ನು ಒಂದೊಂದಾಗಿ ಜನ್ಮ ನೀಡುತ್ತಿದ್ದಂತೆ ಕಂಸನು ಆ ಮಕ್ಕಳನ್ನು ಕೊಲ್ಲುತ್ತಿದ್ದನು. ಏಳನೇ ಮಗುವಾಗಿ ಭಗವಂತನ ಅಂಶ ಮತ್ತು ಆದಿಶೇಷನ ಪೂರ್ಣಾವತಾರನಾದ ಬಲರಾಮನು ದೇವಕಿಯ ಗರ್ಭವನ್ನು ಪ್ರವೇಶಿಸಿದನು. ಆದರೆ ಭಗವತ್ ಸಂಕಲ್ಪ ದಿಂದ  ಬಲರಾಮನನ್ನು ಶ್ರೀವಸುದೇವನ ಮತ್ತೋರ್ವ ಪತ್ನಿಯಾದ ರೋಹಿಣಯ ಗರ್ಭಕ್ಕೆ ವರ್ಗಾಯಿಸಲಾಯಿತು.ಆ ಸಮಯದಲ್ಲಿ ರೋಹಿಣಯು ಶ್ರೀವಸುದೇವನ ಹತ್ತಿರದ ಬಂಧುವಾದ ನಂದಗೋಪನ ಪಟ್ಟಣವಾದ ಗೋಕುಲದಲ್ಲಿ ವಾಸಿಸುತ್ತಿದ್ದಳು.ಅಲ್ಲಿಯೇ ಬಲರಾಮನಿಗೆ ಜನ್ಮ  ನೀಡಿದಳು.

ಅಷ್ಟಮ ಪುತ್ರನಾಗಿ , ಭಗವಂತನ ಸ್ವತಃ ದೇವಕಿಯ ಗರ್ಭದವನ್ನು ಶ್ರೀಕೃಷ್ಣನಾಗಿ ಪ್ರವೇಶಿಸಿದನು. ಆವಣಿ/ಸಿಂಹಮಾಸದಲ್ಲಿ, ರೋಹಿಣಿ ನಕ್ಷತ್ರ, ಅಷ್ಟಮೀ ತಿಥಿಯಲ್ಲಿ, ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ  ಉತ್ತರದ ಮಥುರೆಯಲ್ಲಿ ಅವತರಿಸಿದನು.ಅವನು ತನ್ನ ಮೂಲ ರೂಪವಾದ ಚತುರ್ಭುಜ ವಿಷ್ಣು ರೂಪದಲ್ಲಿ ಶಂಖ,ಚಕ್ರ ಇತ್ಯಾದಿ ಆಯುಧಗಳನ್ನು ಧರಿಸಿ ಕಾಣಿಸಿಕೊಂಡನು.ಇದನ್ನು ನೋಡಿದ ದೇವಕಿ ಮತ್ತು ವಸುದೇವರು ಆಶ್ಚರ್ಯಚಕಿತರಾದರು ಮತ್ತು ಆನಂದಗೊಂಡರು.ಅದೇ ಸಮಯದಲ್ಲಿ ಅವರು ಶ್ರೀಕೃಷ್ಣನ ಸುರಕ್ಷತೆಯ ಬಗ್ಗೆ ಭಯಗೊಂಡರು.ಅವರು ಭಗವಂತನು ತನ್ನ ಅಲೌಕಿಕ ರೂಪವನ್ನು ಮರೆಮಾಡಿ,  ಮಾನವ ರೂಪದಲ್ಲಿ ಪ್ರಕಟಗೊಳ್ಳಲು ಪ್ರಾರ್ಥಿಸಿದರು ಮತ್ತು ಅವರು ಒತ್ತಾಯಿಸಿದರು.ತರುವಾಯ ವಸುದೇವನ ಸಂಕೋಲೆಯಗಳು ಮುರಿದವು, ಕಾವಲುಗಾರರು ಮೂರ್ಛೆ ಹೋದರು.ಭಗವಂತನ ಕೃಪೆಯಿಂದ ಬಾಗಿಲುಗಳು ತಾವಾಗಿಯೇ ತೆರೆದುಕೊಂಡವು. ಆಗ ಭಗವಂತನು ವಸುದೇವನಿಗೆ ಹೇಳಿದನು “ನನ್ನನ್ನು ಯಮುನಾ ನದಿಯ ಇನ್ನೊಂದು ದಡಲ್ಲಿರುವ ಗೋಕುಲಕ್ಕೆ ಕಳೆದುಕೊಂಡು ಹೋಗಿ ಮತ್ತು ನನ್ನನ್ನು ಯಶೋಧ ನಂದಗೋಪನೊಂದಿಗೆ ಇರಿಸಿ; ಯಶೋಧೆಯು ಜನ್ಮ ನೀಡಿದ ನೋಡಿದ ಹೆಣ್ಣುಮಗುವನ್ನು ಇಲ್ಲಿಗೆ ಕರೆತನ್ನಿ “.

ವಸುದೇವನನು ಭಗವಂತನ ವಾಣಿಯನ್ನು ಅನುಸರಿಸಿ  ಶ್ರೀಕೃಷ್ಣನನ್ನು ತನ್ನ ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತುಕೊಂಡು ಯಮುನಾ ದಡವನ್ನು ತಲುಪಿದನು. ಅವನು ಯಮುನಾದಲ್ಲಿ ದೊಡ್ಡ ಮಳೆ ಮತ್ತು ಪ್ರವಾಹವನ್ನು ವೀಕ್ಷಿಸಿದರು ಮತ್ತು ದಿಗ್ಭ್ರಮೆಗೊಂಡರು. ಭಗವಂತನ ಕೃಪೆಯಿಂದ ಯಮುನೆಯ ಮಧ್ಯದಲ್ಲಿ ಒಂದು ದಾರಿ ಕಾಣಿಸಿತು; ಆದಿಶೇಷನು ಕೃಷ್ಣನಿಗೆ ಕೊಡೆಯಾಗಿ ನಿಂತನು; ಅವನು ಇನ್ನೊಂದು ಬದಿಗೆ ದಾಟಿ ನಂದಗೋಪನ ಅರಮನೆಯನ್ನು ತಲುಪಿದನು. ಆ ಸಮಯದಲ್ಲಿ, ಯಶೋಧ ಯೋಗ ಮಾಯಾ (ದುರ್ಗಾ) ಗೆ ಜನ್ಮ ನೀಡಿದ್ದಳು. ವಸುದೇವರು ಶ್ರೀಕೃಷ್ಣನನ್ನು ಇರಿಸಿದರು ಮತ್ತು ಹೆಣ್ಣು ಮಗುವನ್ನು ತೆಗೆದುಕೊಂಡು ಬೇಗನೆ ಸೆರೆಮನೆಗೆ ಮರಳಿದರು. ಅವನು ಅಲ್ಲಿಗೆ ಪ್ರವೇಶಿಸಿದ ತಕ್ಷಣ, ಎಲ್ಲವೂ ಹಿಂದಿನ ಸ್ಥಿತಿಗೆ ಮರಳಿತು ಮತ್ತು ದೇವಕಿ ಮತ್ತು ವಸುದೇವರು ಇಬ್ಬರೂ ಎಲ್ಲವನ್ನೂ ಮರೆತು ಅಳಲು ಪ್ರಾರಂಭಿಸಿದರು. ಕಾವಲುಗಾರರು ಹೋಗಿ ಎಂಟನೆಯ ಮಗುವಿನ ಜನನದ ಬಗ್ಗೆ ಕಂಸನಿಗೆ ತಿಳಿಸಿದರು. ಕಂಸನು ತಕ್ಷಣ ಅಲ್ಲಿಗೆ ಬಂದು ಮಗುವನ್ನು ಹಿಡಿದು “ನಾನು ಈ ಮಗುವನ್ನು ಕೊಂದು ಅಪಾಯದಿಂದ ಮುಕ್ತನಾಗುತ್ತೇನೆ” ಎಂದು ಹೇಳಿದನು. ಮಗುವು ಆಕಾಶಕ್ಕೆ ಹಾರಿತು, ದುರ್ಗೆಯ ರೂಪವನ್ನು ಮರಳಿ ಪಡೆದುಕೊಂಡಿತು ಮತ್ತು “ನಿನ್ನನ್ನು ಕೊಲ್ಲಲು ಹುಟ್ಟಿದವನು ಸುರಕ್ಷಿತವಾಗಿ ಬದುಕುತ್ತಾನೆ. ಸೂಕ್ತ ಸಮಯದಲ್ಲಿ ನಿನ್ನನ್ನು ಕೊಲ್ಲುತ್ತಾನೆ” ಎಂದು ಹೇಳಿ ಮಾಯವಾದಳು. ಕಂಸನು ಕೋಪಗೊಂಡು ತನ್ನ ಕಾವಲುಗಾರರಿಗೆ ನವಜಾತ ಶಿಶುಗಳನ್ನು ಎಲ್ಲೆಡೆ ಹುಡುಕುವಂತೆ ಆದೇಶಿಸಿದನು.

ಈಗ ಗೋಕುಲದಲ್ಲಿ ಯಶೋಧೆಯು ಸುಂದರವಾದ ಗಂಡು ಮಗುವಿಗೆ ಜನ್ಮ  ನೀಡಿದ ವಾರ್ತೆಯನ್ನು ಕೇಳಿದ ಗೋಕುಲದ ಎಲ್ಲಾ ಗೋಪ-ಗೋಪಿಯರು ಶ್ರೀಕೃಷ್ಣನ ಜನ್ಮ ದಿನವನ್ನು ಸಂಭ್ರಮದಿಂದ ಕೊಂಡಾಡಿದರು.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://srivaishnavagranthams.wordpress.com/2023/08/22/krishna-leela-1/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org