Monthly Archives: April 2023

ಆೞ್ವಾರ್ ತಿರುನಗರಿಯ ವೈಭವ – ಪ್ರಾಚೀನ ಇತಿಹಾಸ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮ:

ಆೞ್ವಾರ್ ತಿರುನಗರಿಯ ವೈಭವ

ಶ್ರೀ ಕುರುಗಾಪುರಿ ಕ್ಷೇತ್ರವು, ಆದಿ ಕ್ಷೇತ್ರವೆಂದೂ ಕರೆಯಲ್ಪಡುವ ಆಳ್ವಾರ್ ತಿರುನಗರಿ ಒಂದು ಪುಣ್ಯಕ್ಷೆತ್ರ. ಇದು ಎಂಪೆರುಮಾನ್ ಶ್ರೀಮಾನ್ ನಾರಾಯಣನಿಂದ ಅವನ ಲೀಲೆಗಾಗಿ ರಚಿಸಲ್ಪಟ್ಟ ಶ್ರೇಷ್ಠತೆಯನ್ನು ಹೊಂದಿದೆ. ಸೃಷ್ಟಿಯ ಸಮಯದಲ್ಲಿ, ಬ್ರಹ್ಮಾಂಡವನ್ನು ಸೃಷ್ಟಿಸಿದ ನಂತರ, ಅವನು ಮೊದಲು ನಾನ್ಮುಖನ್ (ನಾಲ್ಕು ಮುಖಗಳುಳ್ಳವನು) ಎಂದು ಕರೆಯಲ್ಪಡುವ ಬ್ರಹ್ಮನನ್ನು ಸೃಷ್ಟಿಸುತ್ತೇನೆ , ನಂತರ ಅವನ ಮೂಲಕ ಸೃಷ್ಟಿ (ಉಳಿದಿರುವ ಸೃಷ್ಟಿ) ಅನ್ನು ನಡೆಸುತ್ತೇನೆ ಎಂದು ಸಂಕಲ್ಪಿಸಿದನು. ಆ ಬ್ರಹ್ಮನು ಎಂಪೆರುಮಾನಿನ ದರ್ಶನಕ್ಕಾಗಿ ಹಾಗು ಸೃಷ್ಟಿಕಾರ್ಯದ ನಿರ್ವಹಣೆಯ ಆಲೋಚನೆಯೊಂದಿಗೆ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಎಂಪೆರುಮಾನಿನ ಕೃಪೆಯನ್ನು ಪಡೆದನು. ಬ್ರಹ್ಮನು ಎಂಪೆರುಮಾನನ್ನು ಅನೇಕ ವಿಧಗಳಲ್ಲಿ ಸ್ತುತಿಸಿದನು. ಆ ಸಮಯದಲ್ಲಿ, ಎಂಪೆರುಮಾನ್ ಕರುಣೆಯಿಂದ ಬ್ರಹ್ಮನಿಗೆ ಗುಪ್ತ ವಿಷಯವೊಂದನ್ನು ಹೇಳಿದನು. ಭೂಮಿಯ ಮೇಲೆ ಭಾರತ ದೇಶದ ದಕ್ಷಿಣ ಭಾಗದಲ್ಲಿ, ಮಲಯ ಮೇಲೆ ಪರ್ವತ ಶ್ರೇಣಿಯಿದೆ. ತಾಮ್ರಭರಣೀ ನದಿಯು ಈ ಮಲಯ ಮೇಲೆಯಿಂದ ಹುಟ್ಟುತ್ತದೆ. ಆದಿಕ್ಷೇತ್ರವು ಅದರ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಅಲ್ಲಿ ಆದಿನಾಥನ್ನು ಸುಂದರ ರೂಪವನ್ನು ತಾಳಿ ಶ್ರೀಮಹಾಲಕ್ಷ್ಮಿಯೋಂದಿಗೆ ಯಾರಿಗೂ ಕಾಣದೆ, ಅಲ್ಲಿ ವಿಹರಿಸುತಿದ್ದಾನೇಂದು ಬ್ರಹ್ಮನಿಗೆ ಹೇಳಿದನು. ಅವನು ಅಲ್ಲಿ ತನ್ನನು ಪೂಜಿಸಬಹುದೆಂದು ಬ್ರಹ್ಮನಿಗೆ ಹೇಳಿದನು. ಈ ಕ್ಷೇತ್ರದ ಶ್ರೇಷ್ಠತೆಯ ಬಗ್ಗೆ ತಿಳಿದುಕೊಂಡ ಬ್ರಹ್ಮನು ಸಂತೋಷಗೊಂಡನು ಮತ್ತು ಇದನ್ನು ಕುರುಗ ಕ್ಷೇತ್ರವೆಂದು ಕರೆಯಲು ಬಯಸಿದನು, ಅದಕ್ಕೆ ಎಂಪೆರುಮಾನ್ ಒಪ್ಪಿದರು. ಕ್ರಮೇಣ, ಬ್ರಹ್ಮನು ಆದಿಕ್ಷೇತ್ರವನ್ನು ತಲುಪಿದನು ಮತ್ತು ದೀರ್ಘಕಾಲದವರೆಗೆ ಎಂಪೆರುಮಾನ್ನನ್ನು ಚೆನ್ನಾಗಿ ಪೂಜಿಸಿದನು. ಈ ಕ್ಷೇತ್ರ ಹಾಗು ಇಲ್ಲಿ ಹರಿಯುವ ತಾಮ್ರಭರಣೀ ನದಿಯು ಎಂಪೆರುಮಾನಿಗೆ ತುಂಬಾ ಪ್ರಿಯವಾದದ್ದು ಎಂದು ನಮ್ಮ ಪೂರ್ವರು ತೋರಿಸಿಕೊಟ್ಟಿದ್ದಾರೆ.

ಕೆಲವು ಮಹರ್ಷಿಗಳು ಈ ಸ್ಥಳಕ್ಕೆ ತೀರ್ಥಯಾತ್ರೆಗೆ ಬಂದರು ಮತ್ತು ಎಂಪೆರುಮಾನ್ನನ್ನು ಪೂಜಿಸಿದರು. ಆ ಸಮಯದಲ್ಲಿ ಒಬ್ಬ ಬೇಟೆಗಾರ ಮತ್ತು ಆನೆ ಪರಸ್ಪರ ಹೊಡೆದಾಡಿ ಒಬ್ಬರನ್ನು ಒಬ್ಬರು ಕೊಂದರು. ವಿಷ್ಣು ಲೋಕದಿಂದ ದೂತರು ಅಲ್ಲಿಗೆ ಆಗಮಿಸಿ ಎರಡೂ ಆತ್ಮಗಳನ್ನು ವಿಷ್ಣುಲೋಕಕ್ಕೆ ಕರೆದೊಯ್ದರು. ಇದನ್ನು ಕಂಡ ಮಹರ್ಷಿಗಳು ಈ ಸ್ಥಳದ ಮಹಿಮೆಯೇ ಕಾರಣವೆಂದು ಅರಿತು ಕೊಂಡಾಡಿದರು.

ಇಲ್ಲಿ ದಾಂತನೆಂಬವನ ವೃತ್ತಾಂತವನ್ನು ಆನಂದಿಸಬಹುದು. ಭಾರತದ ಉತ್ತರ ಭಾಗದಲ್ಲಿರುವ ಶ್ರೀ ಸಾಲಗ್ರಾಮ ದಿವ್ಯದೇಶದಲ್ಲಿ ಒಬ್ಬ ಶಿಷ್ಯನು, ಆ ಸ್ಥಳದಲ್ಲಿ ವಾಸಿಸುತ್ತಿದ್ದ. ಒಬ್ಬ ಬ್ರಾಹ್ಮಣನಿಂದ ವೇದಗಳನ್ನು ಕಲಿಯುತ್ತಿದ್ದನು. ಅವನ ಅಸಮರ್ಪಕ ಜ್ಞಾನದಿಂದಾಗಿ, ಅವನು ಬ್ರಾಹ್ಮಣರಿಂದ ಸರಿಯಾಗಿ ಕಲಿಯಲಿಲ್ಲ. ಬ್ರಾಹ್ಮಣನು ಶಿಷ್ಯನಿಗೆ “ನೀನು ವೇದಗಳನ್ನು ಸರಿಯಾಗಿ ಕಲಿಯದ ಕಾರಣ ಮುಂದಿನ ಜನ್ಮದಲ್ಲಿ ನೀನು ಶೂದ್ರನಾಗಿ ಹುಟ್ಟುವೆ” ಎಂದು ಶಪಿಸಿದನು. ಆದರೆ, ಆ ಶಿಷ್ಯನು ಶಾಪಕ್ಕೆ ಹೆದರುವ ಬದಲು, ಆ ಸ್ಥಳದಲ್ಲಿಯೇ ಉಳಿದು, ಆ ಸ್ಥಳದ ಸಮೀಪದಲ್ಲಿರುವ ವಿಷ್ಣು ದೇವಾಲಯದಲ್ಲಿ ಹುಲ್ಲನ್ನು ಕೊಯ್ದು, ಹುಲ್ಲನ್ನು ಮಾರಿ ಜೀವನ ಸಾಗಿಸುತ್ತಿದ್ದನು. ಆ ಶಿಷ್ಯನು ವಿಷ್ಣುವಿನ ಕರುಣೆಗೆ ಒಳಗಾದನು (ದೇವಾಲಯದ ಹುಲ್ಲನ್ನು ಕತ್ತರಿಸಿ ದೇವಾಲಯವನ್ನು ಶುಚಿಗೊಳಿಸಿ ಸುಂದರವಾಗಿ ಮಾಡಿದರಿಂದ). ಅವನು ತನ್ನ ಮುಂದಿನ ಜನ್ಮದಲ್ಲಿ ಆದಿಕ್ಷೇತ್ರದಲ್ಲಿ ಶೂದ್ರನಾಗಿ ಜನಿಸಿದನು. ಎಂಪೆರುಮಾನ್ ಅವನ ಕರುಣೆಯಿಂದಾಗಿ, ಅವನು ತಾಳ್ಮೆಯಿಂದ ಇದ್ದನು ಮತ್ತು ದಂತ ಎಂಬ ಹೆಸರನ್ನು ಪಡೆದನು. ಅವನು ಎಂಪೆರುಮಾನ್‌ನನ್ನು ಪೂಜಿಸುತ್ತಾ ಅಲ್ಲಿಯೇ ಉಳಿದರು. ದೇವಾಸುರರ ನಡುವಿನ ಯುದ್ಧದ ಸಮಯದಲ್ಲಿ, ದೇವತೆಗಳ ಮುಖ್ಯಸ್ಥನಾದ ಇಂದ್ರನು ದೇವತೆಗಳೊಂದಿಗೆ ಇಲ್ಲಿಗೆ ಬಂದು ಎಂಪೆರುಮಾನನ್ನು ಪೂಜಿಸಿದನು. ಆದರೆ, ದಾಂತನ ಮೇಲಿನ ಅವರ ಅಪರಾಧದಿಂದಾಗಿ, ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ದಾಂತನು ಅವರ ಪಾಪಗಳನ್ನು ಕ್ಷಮಿಸಿ, ಅವರ ದೃಷ್ಟಿಯನ್ನು ನೀಡುವಂತೆ ಎಂಪೆರುಮಾನ್‌ನಲ್ಲಿ ಪ್ರಾರ್ಥಿಸಿದನು . ಎಂಪೆರುಮಾನ್‌ ಅವನಿಗೆ ದೃಷ್ಟಿಯನ್ನು ಕೊಟ್ಟನು. ಅವನು ಇಲ್ಲಿ ಎಂಪೆರುಮಾನ್ ಆರಾಧನೆಯನ್ನು ಮುಂದುವರೆಸಿದನು ಮತ್ತು ಕೊನೆಯಲ್ಲಿ, (ಸಂಸಾರದಿಂದ) ಮುಕ್ತಿಯನ್ನು ಪಡೆದನು.

ಪೂರ್ವದಲ್ಲಿ, ಶಂಖಮುನಿವನೆಂಬ ಋಷಿ ಇಂದ್ರ ಪದವಿಯನ್ನು ಪಡೆಯಲು ತಪಸ್ಸು ಮಾಡುತ್ತಿದ್ದರು. ನಾರದ ಮಹರ್ಷಿ ಅಲ್ಲಿ ಬರಲು, ತನ್ನ ತಪಸ್ಸಿನ ಬಗ್ಗೆ ವಿಚಾರಿಸಿದ ನಾರದರಿಗೆ ಶಂಖಮುನಿಯು ನಮಸ್ಕರಿಸಿದನು. ಶಂಖಮುನಿಯು ನಾರದರಿಗೆ, ವಿಷ್ಣುವು ಇತರ ದೇವತೆಗಳೊಂದಿಗೆ ಸಮಾನವೆಂದು ಭಾವಿಸಿದನೆಂದು ಹೇಳಿದ. ನಾರದರು, “ನೀನು ದೊಡ್ಡ ತಪ್ಪು ಮಾಡಿದೆ. ನೀನು, ಪರಬ್ರಹ್ಮನಾದ ವಿಷ್ಣುವನ್ನು ಇತರ ದೇವತೆಗಳೊಂದಿಗೆ ಸಮವೆಂದು ಭಾವಿಸಿದಕಾರಣ, ಸಾಗರದಲ್ಲಿ ಶಂಖನಾಗಿ ಹುಟ್ಟುವೆ” ಎಂದು ಶಪಿಸಿದನು. ಶಂಖಮುನಿಯು ತಮ್ಮ ತಪ್ಪನ್ನು ಅರಿತು ಶಾಪವಿಮೋಚನೆಗೆ ಮಾರ್ಗವನ್ನು ಕೇಳಲು ನಾರದರು ಅವರಿಗೆ “ಆದಿಕ್ಷೇತ್ರದಲ್ಲಿ ಎಂಪೆರುಮಾನ್‌ನ ಕರುಣೆಯಿಂದ ಮುಕ್ತಿಯನ್ನು ಪಡೆಯುವಿರಿ” ಎಂದು ಹೇಳಿದರು. ಮುನಿಯು ಸಾಗರದಲ್ಲಿ ಶಂಖವಾಗಿ ಜನಿಸಿ ತಾಮ್ರಭರಣಿಯನ್ನು ತಲುಪಿದರು, ಅಲ್ಲಿ ಅವರು ಎಂಪೆರುಮಾನನ್ನು ನಿರಂತರವಾಗಿ ಧ್ಯಾನಿಸುತ್ತಿದ್ದರು. ಅವರು ಉಳಿದುಕೊಂಡಿದ್ದ ನದಿಯ ತಡವನ್ನು ಶಂಖ ನಿದ್ಧಿರೈ ಎಂದು ಕರೆಯಲಾಯಿತು. ಎಂಪೆರುಮಾನ್ ಶಂಖದ ರೂಪದಲ್ಲಿದ್ದ ಶಂಖಮುನಿಯನ್ನು ಮತ್ತು ಇತರ ಹಲವಾರು ಶಂಖಗಳನ್ನು ಬಿಡುಗಡೆ ಮಾಡಿದನು. ಇದಲ್ಲದೆ, ಈ ದಿವ್ಯ ಕ್ಷೇತ್ರದಲ್ಲಿ ಎಂಪೆರುಮಾನ್ ತನ್ನ ದಿವ್ಯ ಸ್ವರೂಪವನ್ನು ಕರುಣೆಯಿಂದ ಅನೇಕರು ನೋಡಲು ಸಾಧ್ಯವಾಗುವಂತೆ ವ್ಯಕ್ತಪಡಿಸಿದರು. ಬ್ರಹ್ಮನ ಮೂಲಕ, ಶ್ರೀದೇವಿ, ಭೂದೇವಿ, ನೀಲಾ ದೇವಿ [ಅವರ ದಿವ್ಯ ಮಹಿಷಿಯರು(ಪತ್ನಿಗಳು)], ವರಹ ಪೆರುಮಾಳ್ ಮತ್ತು ಗರುಡರ ದಿವ್ಯವಿಗ್ರಹಗಳನ್ನೂ ಸಹ ಕರುಣೆಯಿಂದ ಕರೆ ತಂದರು.

ಮುಂದೆ, ಬೃಗು, ಮಾರ್ಕಾಂಡೇಯ ಮುಂತಾದ ಮಹರ್ಷಿಗಳೂ, ಕಾರ್ತವೀರ್ಯರ್ಜುನ ಎಂಬ ರಾಜನು ಮತ್ತು ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನರು, ಈ ಕ್ಷೇತ್ರದಲ್ಲಿ ಎಂಪೆರುಮಾನ್‌ನ ದರ್ಶನವನ್ನು ಪಡೆದರು.

ಕುರುಗಾಪುರಿ ಮಾಹಾತ್ಮ್ಯದಲ್ಲಿ ವೇದವ್ಯಾಸರು ತಮ್ಮ ಪುತ್ರರಾದ ಶ್ರೀಶುಕರಿಗಲ್ಲದೆ, ಆದಿಕ್ಷೇತ್ರದ ಶ್ರೇಷ್ಠತೆಯನ್ನು ಬ್ರಹ್ಮ ಮತ್ತು ವಸಿಷ್ಠರಿಗೂ ಸ್ಪಷ್ಟವಾಗಿ ವಿವರಿಸಿದನ್ನು .

ಹೀಗಾಗಿ, ಈ ಕ್ಷೇತ್ರದ ಪ್ರಾಚೀನ ಇತಿಹಾಸವನ್ನು ನಾವು ಆನಂದಿಸಿದ್ದೇವೆ.

ಉಲ್ಲೇಖ – ಕುರುಗಾಪುರಿ ಕ್ಷೇತ್ರ ವೈಭವದ ಕುರಿತು ಆದಿನಾಥರ್ ಆಳ್ವಾರ್ ದೇವಸ್ಥಾನ ಪ್ರಕಟಿಸಿದ ಪುಸ್ತಕ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : https://srivaishnavagranthams.wordpress.com/2022/12/02/azhwarthirunagari-vaibhavam-1/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org